ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆ ಸಾವು | JANATA NEWS
ಕಲಬುರಗಿ : ಸತತ ಮಳೆಯಿಂದ ತುಂಬಿಹರಿಯುವ ಹಳ್ಳದಲ್ಲಿ ಮಹಿಳೆಯೋರ್ವಳು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿರುವ ಘಟನೆ ಆಳಂದ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ.
ಶ್ರೀದೇವಿ ಪೂಜಾರಿ (42) ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿರೋ ಮಹಿಳೆಯಾಗಿದ್ದು. ನಿನ್ನೆ ಸಂಜೆ ತನ್ನ ಕೃಷಿ ಜಮೀನಿನಿಂದ ಮನೆಗೆ ವಾಪಾಸ್ ಬರುವಾಗ ದುರ್ಘಟನೆ ಸಂಭವಿಸಿದೆ.
ಜಮೀನಿನಿಂದ ಮಹಿಳೆ ಮರಳಿ ಮನೆಗೆ ತೆರಳುವಾಗ ಧಾರಾಕಾರ ಮಳೆ ಸುರಿಯಲಾರಂಭಿಸಿದೆ. ಈ ವೇಳೆ ತೀರ್ಥ ಗ್ರಾಮದ ಹೊರವಲಯದಲ್ಲಿರುವ ಹಳ್ಳವನ್ನು ದಾಟಿಕೊಂಡು ಮನೆಗೆ ಹೋಗುವಾಗ ಶ್ರೀದೇವಿ ಕೊಚ್ಚಿಕೊಂಡು ಹೋಗಿರೋದಾಗಿ ತಿಳಿದುಬಂದಿದೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಚರಣೆ ನಡೆಸಿದ್ದು, ಇಂದು ಬೆಳಿಗ್ಗೆ ಘಟನೆ ನಡೆದ ಸ್ಥಳದಿಂದ ಸುಮಾರು 5 ಕಿಲೋ ಮೀಟರ್ ದೂರದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.